
ಶೃಂಗೇರಿ: ಅದ್ಭುತ ಪ್ರದರ್ಶನದ ಹೆಮ್ಮೆಯ ಕ್ಷಣ, ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನಗರದ ಜ್ಞಾನಭಾರತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಾದ ದಿಶಾನ್ ಡಿ, ಪರೀಕ್ಷಿತ್, ಶ್ರೀಷ ಹೊಳ್ಳ U/17 ಬಾಲಕರ ವಿಭಾಗದಲ್ಲಿ, ಉನ್ನತಿ ಸಾನ್ವಿ ಎಸ್ ಗೌಡ ಧನ್ಯಶ್ರೀ U17 ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ, U/14 ಬಾಲಕಿಯರ ವಿಭಾಗದಲ್ಲಿ ನಾದಶ್ರೀ ಶ್ರಾವ್ಯ, ಜನ್ಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. U/14ಬಾಲಕರ ವಿಭಾಗದಲ್ಲಿ ಉದ್ಭವ್, ಗಗನ್, ಪುನೀತ್ ಈ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಜಯಭೇರಿ ಮೊಳಗಿಸಿ ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಅಕ್ಷತಾ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ಶಂಕರನಾರಾಯಣ ವಿದ್ಯಾ ಕೇಂದ್ರ ಮತ್ತು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.




