
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದ ಸುತ್ತ-ಮುತ್ತಲು ಹಾಗೂ ಜಮಖಂಡಿ ತಾಲ್ಲೂಕಿನ ಸರಹದ್ದೀನವರೆಗೆ ರಸ್ತೆ ಪಕ್ಕದಲ್ಲಿ ಇಂಡಿಪೆಂಡೆನ್ಸ್ ಕಂಪನಿಯ ಕಾಲಿಯಾಗಿರುವ ನೀರಿನ ಬಾಟಲಿಗಳ ಮೇಲೆ ದೇಶದ ತ್ರಿವರ್ಣ ಧ್ವಜದ ಬಣ್ಣ ಹೊಂದಿರುವ ಸ್ಟಿಕರ್ಗಳನ್ನು ನೋಡಿದ ಕೂಡಲೇ ಗಲಗಲಿ ಗ್ರಾಮದ ಸ್ನೇಹಿತರು ಕೂಡಿದರು.
ಬಾಟಲ್ಗಳನ್ನು ಸಂಗ್ರಹಿಸಿ ಅದರಲ್ಲಿರುವ ಸ್ಟಿಕರ್ಅನ್ನು ತೆಗೆದು ಅವರ ಕಂಪನಿಗಳಿಗೆ ಕಳಿಸುತ್ತೇವೆ ಮತ್ತು ಕಂಪನಿಯವರು ಬಾಟಲಿಗಳ ಮೇಲೆ ದೇಶದ ಧ್ವಜದ ಬಣ್ಣ ಹಾಕಿ ಅಗೌರವ ಆಗುವಂತ ಸನ್ನಿವೇಶವಾಗಿದೆ. ಭಾರತೀಯರಾದ ನಾವು ಖಂಡಿಸಬೇಕು, ನಮ್ಮಭಾರತದ ಭಾವುಟಕ್ಕೆ ಅದರದ್ದೆ ಆದ ಸ್ಥಾನಮಾನ ಹೊಂದಿದೆ. ಅದು ನಮ್ಮ ಕರ್ತವ್ಯ ಅದನ್ನು ಎಲ್ಲರೂ ಪಾಲಿಸಿ ಅದರ ಮೇಲೆ ಹಾಕಿರುವ ಧ್ವಜದ ಬಣ್ಣ ಹಾಕಿರುವುದು ತೆಗೆಯಬೇಕು ಎಂದು ಒತ್ತಾಯಿಸಿದರು.
ಈ ಸಮಯದಲ್ಲಿ ರಾಜು ಸುತಗುಂಡಿ ಉಪಾಧ್ಯಕ್ಷರು, ಅಂಬೆಡ್ಕರ್ ತರುಣ್ ಸಂಘ ಗಲಗಲಿ. ಶಿವಾನಂದ ಗಲಗಲಿ, ಗ್ರಾಮ ಪಂಚಾಯಿತಿ ಸದಸ್ಯರು, ಅಯುಬ ಶೇಖ. ರಾಜ್ಯ ಉಪಾಧ್ಯಕ್ಷರು ಕರ್ನಾಟಕ ವಿಶ್ವ ನಿರ್ಮಾಣ ಸೇನೆ, ಪ್ರವೀಣ್ ಛಲವಾದಿ, ಅಂಬೆಡ್ಕರ್ ಸೇನೆ, ತಾಲ್ಲೂಕು ಅಧ್ಯಕ್ಷರು ಬೀಳಗಿ, ಪ್ರಶಾಂತ್ ಕೋಳಿ ರವಿ ಛಲವಾದಿ, ಸುಧೀರ್ ಜಾಧವ್ ಹಜರತ್ ಶೇಕ್ ಮತ್ತು ಗ್ರಾಮದ ಯುವಕರು ಭಾಗಿಯಾಗಿದ್ದರು.