ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾ ಬುಡನ್ಸ್ವಾಮಿ ದರ್ಗಾ ವಿವಾದದ ನಡುವೆ ದತ್ತಜಯಂತಿ ಆಚರಣೆ ಹಿನ್ನಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಶೋಭಾಯಾತ್ರೆ ಹಾಗೂ ಡಿಸೆಂಬರ್ 4 ರಂದು ನಡೆಯುವ ದತ್ತಪಾದುಕೆ ದರ್ಶನಕ್ಕಾಗಿ ಜಿಲ್ಲೆಯಾದ್ಯಂತ 5 ಸಾವಿರಕ್ಕೂ ಹೆಚ್ಚು ಪೋಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳ ಸಂಭವವನ್ನು ತಪ್ಪಿಸಲು RAF ಮತ್ತು SAF ಪಡೆಗಳನ್ನು ಸಹ ಕರೆದೊಯ್ಯಲಾಗಿದ್ದು ಸೂಕ್ಷ್ಮವಾದ ಪ್ರದೇಶದಲ್ಲಿ ರೂಟ್ ಮಾರ್ಚ್ ನಡೆಸಲಾಗಿದೆ. ಶಾಂತಿ ಸೌಹಾರ್ದ ಕಾಪಾಡಲು ಎರಡು ಸಮುದಾಯದವರನ್ನು ಸೇರಿಸಿ ಸಭೆ ನಡೆಸಲು ಹಾಗೂ ಕಾರ್ಯಕ್ರಮದ ವೇಳೆ ಪ್ರಚೋದನಾಕಾರಿ ಘೋಷಣೆ ಕೂಗಿದರೆ ಅವರ ಮೇಲೆ ಕೇಸ್ ದಾಖಲಿಸುವುದಾಗಿ ಎಸ್.ಪಿ ವಿಕ್ರಮ್ ಅಮ್ಟೆ ಎಚ್ಚರಿಸಿದ್ದಾರೆ.
