
ಚಿಕ್ಕಮಗಳೂರು: ಮಾಜಿ ಸಚಿವೆ ಮೋಟಮ್ಮರ ಪುತ್ರಿಯಾದ ನಯನ ಮೋಟಮ್ಮ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾಗಿದ್ದಾರೆ. ದಲಿತ ಸಂಘರ್ಷ ಸಮಿತಿ, ಪ್ರಗತಿಪರರು, ರೈತ ಸಂಘದಿಂದ ಪ್ರಾಯಶ್ಚಿತ್ತ ಮೌನ ಪ್ರತಿಭಟನೆ ನಡೆದಿದ್ದು. ಶಾಸಕಿ ನಯನ ಮೋಟಮ್ಮ ಗೆಲುವಿಗೆ ಶ್ರಮಿಸಿ ತಪ್ಪು ಮಾಡಿದ್ದೇವೆಂದು ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ನಗರದ ಕೋರ್ಟ್ ಆವರಣ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆಗೆ ಕೂತ ದಲಿತ ಸಂಘ, ಪ್ರಗತಿಪರರು, ರೈತರು. ಕೇಸರಿ ಶಾಲು ತೊಟ್ಟು ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ನಯನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೇಸರಿ ಶಾಲು ತೊಟ್ಟು ೩ವರ್ಷ ಆದ ಮೇಲೆ ಬಿಜೆಪಿ ಹೋಗ್ತೀನೋ… ಕಾಂಗ್ರೆಸ್ನಲ್ಲೇ ಇರ್ತಿನೋ ಗೊತ್ತಿಲ್ಲ ಎಂದಿದ್ದ ನಯನ ಮೋಟಮ್ಮ, ಹಿಂದೂ ಮಹಾಸಭಾ ಗಣಪತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡಿದ್ದ ನಯನ, ಅನ್ಯ ಧರ್ಮದ ಮೇಲೆ ದ್ವೇಷ ಕಾರುವ ಹಾಗೂ 48ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿರೋ ಪ್ರಮೋದ್ ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಕಿಡಿ ಕಾರಿದ್ದಾರೆ. ಇಂತವರಿಗೆ ಮತ ಹಾಕಿ, ಹಾಕಿಸಿ ತಪ್ಪು ಮಾಡಿದ್ದೇವೆಂದು ನೊಂದು ಗಾಂಧಿ ಎದುರು ಪ್ರಾಯಶ್ಚಿತ್ತ ಧರಣಿ ನಡೆಸಿದ್ದಾರೆ.