
ಶಿವಮೊಗ್ಗ: ಶಿವಮೊಗ್ಗ ನಗರದ ರಾಗಿ ಗುಡ್ಡದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಕ್ರಮ ಮದ್ಯ ಮಾರಟವೇ ಮೂಲ ಕಾರಣವಾಗಿದ್ದು. ಇಲ್ಲಿ ಮಧ್ಯಮ ಬಡ ಕೂಲಿ ಕಾರ್ಮಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಪ್ರದೇಶವಾಗಿದೆ. ಅಕ್ರಮ ಮದ್ಯ ಮಾರಟಕ್ಕೆ ಕ್ರಮ ಕೈಗೊಳ್ಳುವಂತೆ ಕರವೇ ಸ್ವಾಭಿಮಾನಿ ಬಣದಿಂದ ಅಬಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ನಗರದ ರಾಗಿಗುಡ್ಡದಲ್ಲಿ ನಡೆದಿರುವ ಕೆಲವು ಅನಾಹುತಗಳಿಗೆ ಈ ಅಕ್ರಮ ಮದ್ಯ ಮಾರಟವೇ ಕಾರಣವಾಗಿದ್ದು ಈಗಲಾದರೂ ನಿಷ್ಠಾವಂತ ಪೋಲಿಸ್ ಅಧಿಕಾರಿಗಳು ಈ ಭಾಗದಲ್ಲಿ ಕರ್ತವ್ಯ ನಿಯೋಜಿಸಿ ಅಕ್ರಮ ಮಾರಾಟವನ್ನು ತಡೆಹಿಡಿದು, ಗೂಡಂಗಡಿ ಹಾಗೂ ಮನೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೋ ಅವರನ್ನು ಕಂಡುಹಿಡಿದು ಅಬಕಾರಿ ಇಲಾಖೆಯವರು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಅಕ್ರಮ ವ್ಯವಸ್ಥೆಯಿಂದಾಗಿ ಪುಂಡರಿಂದ ಅನಾವ್ಯಶ್ಯಕ ದುಂಬಿ ಕಳ್ಳತನ ಸಹಜವಾಗಿದೆ. ಈ ಹಿಂದೆ ಕರವೇ ಸ್ವಾಭಿಮಾನಿ ಸಂಘಟನೆ ಅಕ್ರಮ ಮದ್ಯವನ್ನು ಮಾರಾಟ ಮಾಡುವವರ ವಿರುದ್ಧ ಸಂಬಂಧಪಟ್ಟ ಇಲಾಖೆಗೆ ದೂರನ್ನು ನೀಡಿದ್ದರೂ ಸಹ ಯಾವ ಅಧಿಕಾರಿಗಳು ಅಥವಾ ಅಬಕಾರಿ ಇಲಾಖೆಯ ಅಧಿಕಾರಿಗಳು ಅನಧಿಕೃತ ಮಾರಾಟಗಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ. ಈ ಅಕ್ರಮ ಮಾರಾಟಗಾರರ ಜೊತೆಗೆ ಅಧಿಕಾರಿಗಳು ಶಾಮಿಲಾಗಿದ್ದಾರ ಎಂಬ ಅನುಮಾನವು ಮೂಡುತ್ತಿದೆ ಎಂದು ಸಂಘವು ಹೇಳಿದೆ.
ಅಕ್ರಮ ಮದ್ಯ ಮಾರಾಟಕ್ಕೆ ಕಾನೂನು ಕ್ರಮ ಕೈಗೊಳ್ಳದೇ ಹೋದಲ್ಲಿ ಸಂಘಟನೆಯು ವಿಭಿನ್ನ ರೀತಿಯ ಪ್ರತಿಭಟನೆಯನ್ನು ಮುಂದಿನ ದಿನದಲ್ಲಿ ನಡೆಸಬೇಕಾಗುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದೆ. ಈ ಪ್ರತಿಭಟನೆಯಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ಎಚ್.ಎಸ್ ಮಹಿಳಾ ಘಟಕದ ಅಧ್ಯಕ್ಷರಾದ ಸವಿತಾ ಸಿ, ನಗರ ಅಧ್ಯಕ್ಷರಾದ ಜೀವನ್ ಡಿ, ಜಿಲ್ಲಾ ಉಪಾಧ್ಯಕ್ಷರಾದ ವಿಜಯ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಾಲತೇಶ್, ಸಂಘಟನೆಯ ಮುಖಂಡರಾದ ಸಾಧಿಕ್, ಸತೀಶ್, ಪುರ್ಲೆ ಆರತಿ, ಕನ್ನಡಪರ ಹೋರಾಟಗಾರರಾದ ಸಂತೋಷ್, ದೇವೇಂದ್ರಪ್ಪ ರಾಮು ಜಾದವ್, ಮಹಮ್ಮದ್ ಆಲಿ, ರವಿಕುಮಾರ್, ಶಿವಕುಮಾರ್, ಸುರೇಶ್, ರಮೇಶ್, ರಾಮು ರಾಗಿಗುಡ್ಡ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.