
ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಬಾಗಲಕೋಟೆ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಜಮಖಂಡಿ ಮತ್ತು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುತ್ತೂರು ಇವರ ಸಹಯೋಗದಲ್ಲಿ ನಡೆದ 2025-2026ನೇ ಸಾಲಿನ 14 ವಯೋಮಿತಿಯೊಳಗಿನ ಮೈಗೂರು ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಎಸ್.ಡಿ.ಎಮ್.ಸಿ ಉಪಾಧ್ಯಕ್ಷರಾದ ಅಕ್ಷತಾ ಶಿವಲಿಂಗ ಹಿಪ್ಪರಗಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ಮಾಡಿದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ನಂದೇಶ ಅವರು ಕ್ರೀಡಾ ಜ್ಯೋತಿಯೊಂದಿಗೆ ಕಾರ್ಯಕ್ರಮ ಚಾಲನೆ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರಾಸ್ಥಾವಿಕ ನುಡಿಗಳನ್ನು ಮಾತನಾಡಿದ ಕಾಡೇಶ ಕೊಲ್ಲೂರ ಕ್ಷೇತ್ರ ಸಮನ್ವಯ ಅಧಿಕಾರಿಗಳು ಜಮಖಂಡಿ ಮತ್ತು ಮುತ್ತೂರು ಗ್ರಾಮದ ಹಿರಿಯರಾದ ನಾಗಪ್ಪ ಹಿಪ್ಪರಗಿ ಹಾಗೂ ಅರುಣ್ ದೇಮಾಯಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಹಿರಿಯರು ಶಿಕ್ಷಕರು – ವಿದ್ಯಾರ್ಥಿ – ವಿದ್ಯಾರ್ಥಿನೀಯರು ಇದ್ದರು.
ಬಹುಮಾನ ವಿತರಣೆಯನ್ನು ಬಾಹುಬಲಿ ಪಡಸಲಗಿ ಮತ್ತು ಅರಣ್ ದೇಮಾಯಿ ಹಾಗೂ ಶಿಕ್ಷಕರು ಸೇರಿ ಬಹುಮಾನ ವಿತರಣೆ ಮಾಡಿದರು