ಶೃಂಗೇರಿ: ಶ್ರೀ ವಿದ್ಯಾಶಂಕರರ ಮಹಾ ರಥೋತ್ಸವದ ಪ್ರಯುಕ್ತ ದಿನಾಂಕ 05-11-2024 ರಿಂದ 08-11-2024 ರವರೆಗೆ ಸಂಜೆ 7-30ಕ್ಕೆ ಶ್ರೀ ಮಠದಿಂದ ಕಟ್ಟೆಬಾಗಿಲಿನವರೆಗೆ ಉತ್ಸವ, ದಿನಾಂಕ 09-11-2024ರ ಶನಿವಾರ ಶ್ರೀ ವಿದ್ಯಾಶಂಕರರ ಮಹಾ ರಥೋತ್ಸವ, ದಿನಾಂಕ 10-11.2024ರ ಬೆಳಿಗ್ಗೆ ಓಕಳಿ ಹಾಗೂ ಸಂಜೆ ತುಂಗಾ ನದಿಯಲ್ಲಿ ತೆಪ್ಪೋತ್ಸವ, ಹಾಗೂ ಲಕ್ಷದೀಪ ಕಾರ್ಯಕ್ರಮದ ಪ್ರಯುಕ್ತ 11-11-2024ರಿಂದ ಸಂಜೆ 7-30ಕ್ಕೆ ತುಂಗಾರತಿ ಮತ್ತು ತೆಪ್ಪೋತ್ಸವ, ದಿನಾಂಕ15-11-2024 ರಂದು ಈಶ್ವರಗಿರಿಯಲ್ಲಿ ಪರಕಾಳಿ ದಹನದ ನಂತರ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾ ಸನ್ನಿದಾನಂಗಳವರು ದೀಪ ಬೆಳಗಿದ ಮೇಲೆ ಸೈರನ್ ಮೊಳಗುತ್ತದೆ ನಂತರ ಲಕ್ಷ ದೀಪೋತ್ಸವ ನಡೆಯುತ್ತದೆ. ತದನಂತರ ಶ್ರೀ ಭವಾನಿ ಸಹಿತ ಶ್ರೀ ಮಲಹಾನಿಕರೇಶ್ವರ ಸ್ವಾಮಿಯ ಉತ್ಸವ ಶ್ರೀ ಮಠಕ್ಕೆ ಆಗಮಿಸಿ, ಶ್ರೀ ಶಾರದಾಂಬೆಗೆ ಬಂಗಾರದ ದಿಂಡಿ ಉತ್ಸವವಾದ ನಂತರ ತುಂಗಾ ನದಿಯಲ್ಲಿ ವೈಭವದ ತೆಪ್ಪೋತ್ಸವ ಹಾಗೂ ತುಂಗಾರತಿ ಹಾಗೂ ತುಂಗೆಗೆ ದೀಪಗಳ ಬಾಗಿನ ಅರ್ಪಿಸುವ ಕಾರ್ಯಕ್ರಮ ನೆಡೆಯಲಿದೆ.
ವಿ.ಸೂ: ದಿನಾಂಕ 09-11-2024ರ ಶನಿವಾರ ಶ್ರೀ ವಿದ್ಯಾಶಂಕರರ ಮಹಾ ರಥೋತ್ಸವ ನಡೆಯುವುದರಿಂದ ಅಂದು ಶ್ರೀ ಮಠದಿಂದ-ಕಟ್ಟೆಬಾಗಿಲು-ಬಸ್ ಸ್ಟಾಪ್ವರೆಗೆ ಎಲ್ಲಾ ರೀತಿಯ ವಾಹನಗಳ ಓಡಾಟ ಮತ್ತುನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ.