
ಚಿಕ್ಕಮಗಳೂರು: ಎರಡು ದಿನಗಳ ಹಿಂದೆ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಧರೆ ಕುಸಿತವಾಗಿತ್ತು. ಮುಳ್ಳಯನಗಿರಿ ಕ್ರಾಸ್ ಸೇರಿ ಹಲವೆಡೆ ಕುಸಿತದ ಭೀತಿ ಎದುರಾಗಿದೆ. ಸೆಪ್ಟೆಂಬರ್ ೧೪ರವರೆಗೂ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಮುಳ್ಳಯನಗಿರಿ, ದತ್ತಪೀಠ ಮಾರ್ಗದಲ್ಲಿ ರಸ್ತೆ ಕುಸಿತದ ಭೀತಿ ಎದುರಾಗಿದೆ. ಈಗಾಗಲೇ ಮುಳ್ಳಯನಗಿರಿ, ದತ್ತಪೀಠ ಭಾಗದ ಹೋಂ ಸ್ಟೇ ಬುಕ್ ಮಾಡಿದವರಿಗೆ ವಿನಾಯಿತಿ ನೀಡಿದೆ. ಹೋಂ ಸ್ಟೇ ಹಾಗೂ ರೆಸಾರ್ಟ್ ಬುಕ್ಕಿಂಗ್ ಮಾಡೋರು ಅಧಿಕೃತ ದಾಖಲೆ ನೀಡಬೇಕು. ಸದ್ಯಕ್ಕೆ ಸ್ಥಳೀಯ ವಾಹನ ಹಾಗೂ ಸರ್ಕಾರಿ ವಾಹನಗಳಿಗೆ ಅವಕಾಶವಿದೆ. ಕುಸಿತದ ಭೀತಿಯ ಬಗ್ಗೆ ಡಿಸಿಗೆ ಉಪ ವಿಭಾಗಾಧಿಕಾಗೆ ಪತ್ರ. ಪ್ರವಾಸ ಮುಂದೂಡುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮನವಿ ಮಾಡಿದ್ದಾರೆ.